Published - Tue, 03 Oct 2023

Oils suggestion for different areas

ರಾಸಾಯನಿಕ ಸಂಘಟನೆಗಳ ಆಧಾರದ ಮೇಲೆ ಇದು ಒಳ್ಳೆಯದು ಇದು ಕೆಟ್ಟದ್ದು ಎಂದು ಅನುಚಿತ ನಿರ್ಧಾರಗಳಿಂದ ಹೆಸರಾಂತ ಆಹಾರ ತಜ್ಞರು, ವೈದ್ಯರೂ ಸೇರಿದಂತೆ ಅಲ್ಪ ಮಾಹಿತಿ ಹೊಂದಿದವರೂ ಸಹ ಇಂಥದೇ ಆಹಾರ ಪದಾರ್ಥ ಆರೋಗ್ಯಕ್ಕೆ ಒಳ್ಳೆಯದೆಂದು ಸಾರುತ್ತಿದ್ದಾರೆ. 


ಈ ರೀತಿಯ ಅನುಚಿತ ಹೇಳಿಕೆಗಳಲ್ಲಿ ಖಾದ್ಯ ತೈಲವೂ ಸೇರಿಕೊಂಡುಬಿಟ್ಟಿದೆ. ರಿಫೈನ್ಡ್ ಎಣ್ಣೆಯ ಬಳಕೆ ದೋಷಪೂರಿತವಾದುದು ಎಂದು ತಿಳಿದಮೇಲಂತೂ ಒಂದು ನಿರ್ದಿಷ್ಟ ಪ್ರಾಂತ್ಯದಲ್ಲಿ ದೊರೆಯುವ ಖಾದ್ಯ ತೈಲವನ್ನು ಇಡೀ ಜಗತ್ತಿಗೆ ಹಂಚಲು ಅಸಾಧ್ಯವೆಂದು ತಿಳಿದೂ ಸಹ ಅದರ ಗುಣವಿಶೇಷಗಳನ್ನು ಹೋಗಳುತ್ತ ಅದನ್ನು ಬಳಸುವವರು ಶ್ರೇಷ್ಠ ಎಂತಲೂ ,ಅದನ್ನು ಬಳಸದವರು ಏನೋ ಕಳೆದುಕೊಂಡವರಂತೆ ಕೀಳರಿಮೆಯಿಂದ ಬಾಳುವಂತಾಗುತ್ತಿದೆ. 

ಇದು ಪಾಶ್ಚಾತ್ಯರ ವ್ಯಾಪಾರೀಕರಣದ ಭಾವಧೋರಣೆ. ಆಲೀವ್ ಆಯಿಲ್ ಅನ್ನು ಹೆಚ್ಚು ಪ್ರಚಾರ ಮಾಡುವ ಅವರ ಹಾದಿಯನ್ನೇ ಅನುಸರಿಸಿ ಕೇವಲ ಕೊಬ್ಬರಿ ಎಣ್ಣೆಯೊಂದೇ ಶ್ರೇಷ್ಠ ಎಂದು ಸಾರುತ್ತಿದ್ದೇವೆ. ಈ ದೇಶ ಪ್ರಾಂತ್ಯವಾರು ಆಹಾರ , ಜೀವನಶೈಲಿ ಅಷ್ಟೇ ಏಕೆ ನೈಸರ್ಗಿಕವಾಗಿ ಬರುವ  ಶಾರೀರಿಕ ಪ್ರಕೃತಿಗಳನ್ನೂ ಪ್ರಾಂತ್ಯವಾರು ವಿಭಿನ್ನವಾಗಿ ಇಟ್ಟಿದೆ. ಕನ್ನಡ ಭಾಷೆಯನ್ನೇ ಹತ್ತು ಶೈಲಿಗಳಲ್ಲಿಯೂ , ಮತ್ತು ಒಂದೇ ವಸ್ತುವಿಗೆ ಇದೊಂದೇ ಭಾಷೆಯಲ್ಲಿ ಪ್ರಾಂತ್ಯವಾರು ಬೇರೆ ಬೇರೆ ಶಬ್ದಗಳಿಂದ ಕರೆಯುವಷ್ಟು ವೈವಿದ್ಯಮಯ ಸಹಜ ಬಾಳು ಭಾರತೀಯರದು. 


ಇಂತಹ ವಿಭಿನ್ನ ಶಾರೀರಿಕ ಪ್ರಕೃತಿ ಉಳ್ಳವರಿಗೆ ಒಂದು ನಿರ್ದಿಷ್ಟ ಆಹಾರವೇ ಶ್ರೇಷ್ಠ ಎಂದು ತಜ್ಞರಾದಿ ಸಾಮಾನ್ಯರೂ ಹೇಳುತ್ತಿರುವುದು ಅನುಚಿತ ಎನಿಸುತ್ತಿದೆ. 


ಆತ್ಮೀಯರೇ,

ನೀವು ಹುಟ್ಟಿದ , ಬೆಳೆದು ಬಾಳಿದ ಪ್ರಾಂತ್ಯದಲ್ಲಿ ಸಿಗುವ ಆಹಾರ ಪದಾರ್ಥಗಳನ್ನೇ ಬಳಸುವುದರಿಂದ ಶರೀರ ಆರೋಗ್ಯದಿಂದ ಇರಬಲ್ಲದು. ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯಕ್ಕೆ ವಲಸೆ ಹೋಗಿ ನೇಲಿಸಿದವರು ಕನಿಷ್ಠ ಶೇಕಡಾ 70 ಭಾಗ ತಮ್ಮ ಮೂಲ ಆಹಾರವನ್ನು ಉಳಿದ 30 ಭಾಗ ತಾವು ನೆಲೆಸಿದ ಪ್ರಾಂತೀಯ ಭಾಗದ ಆಹಾರವನ್ನು ಸೇವಿಸುತ್ತ ನಿಧಾನವಾಗಿ ಆಯಾ ಪ್ರಾಂತೀಯ ಆಹಾರಕ್ಕೆ ತಮ್ಮನ್ನು ಒಗ್ಗಿಸಿಕೊಳ್ಳಬೇಕಾಗುತ್ತದೆ. 

★ ಉದಾಹರಣೆಗೆ:

ಕರಾವಳಿಯ ಜನರ ಪ್ರಧಾನ ಆಹಾರ ಮೀನು, ಅವರು ಒಳನಾಡುಗಳಲ್ಲಿ ನೆಲೆಸಿ ಮೀನನ್ನೇ ಪ್ರಧಾನ ಆಹಾರವಾಗಿ ಸೇವಿಸಿದರೆ ಅವರಿಗೆ ಚರ್ಮದ ರೋಗ, ಮಧುಮೇಹ ಬರುವ ಸಾಧ್ಯತೆ ಅತೀ ಹೆಚ್ಚು. ಏಕೆಂದರೆ, ಕರಾವಳಿಯಲ್ಲಿ ಸದಾ ಬೆವರು ಹೊರಹೋಗುತ್ತ ಚರ್ಮದ ಅಡಿ ಸಂಚಯವಾಗುವ ಕ್ಲೇದ ಅಥವಾ ಜಿಡ್ಡು ನಿರಂತರವಾಗಿ ಬೆವರಿನ ಮುಖಾಂತರ ಹೊರಕ್ಕೆ ಹೋಗಿ ಚರ್ಮ ಮತ್ತು ದೇಹ ನೈಸರ್ಗಿಕವಾಗಿ ಶುದ್ಧಿಯಾಗುತ್ತದೆ. ಅದೇ, ಒಳ ಪ್ರಾಂತ್ಯದಲ್ಲಿ ಅಷ್ಟು ಪ್ರಮಾಣದ ಬೆವರು ಹೊರ ಹೋಗದ ಕಾರಣ ಅದು ಶರೀರದಲ್ಲಿ ಸಂಚಯವಾಗಿ ಚರ್ಮದ ಕಾಯಿಲೆಯನ್ನೋ, ಮಧುಮೇಹವನ್ನೋ ತರುತ್ತದೆ.



ಈಗ, ಖಾದ್ಯತೈಲಕ್ಕೆ ಬರೋಣ.

ಕರಾವಳಿ ಮಲೆನಾಡಿನ ಜನರಿಗೆ ಶುದ್ಧ ತೆಂಗಿನಎಣ್ಣೆಯು , ಒಳನಾಡಿನವರಿಗೆ ಶೇಂಗಾ ಮತ್ತು ಸೂರ್ಯಕಾಂತಿ ಎಣ್ಣೆಯೂ, ಉತ್ತರಕರ್ನಾಟಕ ಭಾಗದವರಿಗೆ ಶೇಂಗಾ, ಕುಸುಬೆ ಎಣ್ಣೆಗಳನ್ನೂ ಹಾಗೆಯೇ, ಉತ್ತರಭಾರತಕ್ಕೆ ಹೋದರೆ ಸಾಸುವೆ ಎಣ್ಣೆಯನ್ನು ಬಳಸುವುದು ಅತ್ಯಂತ ಶ್ರೇಯಸ್ಕರವಾಗಿರುತ್ತದೆ. 

ಶತಮಾನಗಳಿಂದ ಈ ಶರೀರಕ್ಕೆ ಸಾತ್ಮ್ಯವಾಗಿರುವ ಎಣ್ಣೆಯನ್ನೇ ಬಳಸುವುದರಿಂದ ಆಯಾ ಹವಾಮಾನಕ್ಕೆ ಸೂಕ್ತವಾಗಿ ಶರೀರವನ್ನು ಸಧೃಢವಾಗಿ ಇಟ್ಟಿರುತ್ತದೆ.


 ಉತ್ತರಕರ್ನಾಟಕದ ಜನರು ಕಡಿಮೆ ಜಿಡ್ಡಿನ ಅಂಶವುಳ್ಳ ಕೊಬ್ಬರಿ ಎಣ್ಣೆಯನ್ನು ಬಳಸಿದರೆ ಅವರ ಶರೀರ ಮತ್ತು ಚರ್ಮಕ್ಕೆ ಹಾನಿಯಾಗುತ್ತದೆ. ಹಾಗೆಯೇ ಮಲೆನಾಡಿನ ಶೀತ ಭಾಗದ ಜನ ಹೆಚ್ಚು ಜಿಡ್ಡುಳ್ಳ ಶೇಂಗಾ ಎಣ್ಣೆಯನ್ನು ಬಳಸಿದರೆ ತೊಂದರೆ ಉಂಟಾಗುತ್ತದೆ. ಇತ್ತೀಚಿನ ಜನರ ಜೀವನ ಶೈಲಿಯ ಆಧಾರದಲ್ಲಿ ನಾವು ಆಹಾರವನ್ನು ಹೀಗೆ ವಿಂಗಡಿಸಬಹುದು.

ಮಾನವ ಯಾವ ಯಾವ ಪ್ರಾಂತ್ಯದಲ್ಲಿ ನೆಲೆಸಿದರೂ ಅವರು ಅತ್ಯಂತ ಕಡಿಮೆ ಶಾರೀರಿಕ ಶ್ರಮದಿಂದ ಮತ್ತು ಹೆಚ್ಚು ಬೌದ್ಧಿಕ ಸಾಮರ್ಥ್ಯದಿಂದ ದುಡಿಮೆ ಮಾಡುವವರು ಕೊಬ್ಬರಿ ಎಣ್ಣೆಯನ್ನೂ, ಹೆಚ್ಚು ಶಾರೀರಿಕ ಶ್ರಮದಿಂದ ದುಡಿಮೆ ಮಾಡುವವರು ಶೇಂಗಾ, ಸೂರ್ಯಕಾಂತಿ ಮುಂತಾದ ತೈಲಗಳನ್ನು ಬಳಸಬಹುದೆಂದು ಸ್ಥೂಲವಾಗಿ ಹೇಳಬಹುದು. 

ಆದಾಗ್ಯೂ , ಪ್ರಾಂತೀಯಮಟ್ಟದ ಆಹಾರ ಸೇವನೆ ಸರ್ವದಾ ಶ್ರೇಷ್ಠವಾಗಿ ಇರುವುದು.





Created by

Comments (0)

Search
Popular categories
Latest blogs
Why Ayurveda gives importance to food
Why Ayurveda gives importance to food
•••••••••••••••••••••••••••••••••••••••  ಆಹಾರದ ಜೊತೆಗಿನ ನೈಸರ್ಗಿಕ ಸಂಬಂಧ ಮತ್ತು ಅದಕ್ಕೆ ಕೊಡುವ ಗೌರವ ಎಂದರೆ ನಿಯಮಗಳು, ಇವುಗಳ ಜೊತೆಗಿನ ಪಯಣವೇ ಆರೋಗ್ಯ.  "ಆಹಾರ ಒಂದು ನಿರ್ಜೀವ ವಸ್ತುವಲ್ಲ, ಅದು ನಮ್ಮ ಅವ್ಯಕ್ತ ಶರೀರ!!"  ಈ ಶರೀರ ನಿತ್ಯವೂ ಸರಿಯಾಗಿ ನಡೆಯಲು ನಿರ್ದಿಷ್ಟ ನಿಯಮಗಳಿವೆ --  ಕಣ್ಣಿನಿಂದ ಮಾತ್ರ ನೋಡಲು ಸಾಧ್ಯ,  ನಾಲಿಗೆಯಿಂದ ಮಾತ್ರ ರುಚಿ ಸಾಧ್ಯ,  ಕೈಯಿಂದ ಕೆಲಸ ಸಾಧ್ಯ,  ಕಾಲಿನಿಂದ ನಡಿಗೆ ಸಾಧ್ಯ...  ಹಾಗೆಯೇ, ಆಹಾರಕ್ಕೂ ನಿರ್ದಿಷ್ಟ ನಿಯಮಗಳಿವೆ, ಆಹಾರದ ಈ ರೀತಿಯ ತಯಾರಿಕೆ ಮಾತ್ರ ನಮಗೆ ಇಂತಹ ಅನುಕೂಲವನ್ನು ಸೃಷ್ಟಿಸುತ್ತದೆ, ಇಲ್ಲದಿದ್ದರೆ ಸಹಜ ಚಲನೆಗೆ ಅನಾನುಕೂಲ ಮಾಡುತ್ತದೆ, ಅದೇ ಅನಾರೋಗ್ಯ ಅಥವಾ ವ್ಯಾಧಿ.•••••••••••••••••••••••••••••••••••••••  ಮಾನವನ‌ ವ್ಯಾಧಿಗಳಲ್ಲಿ ಹೆಚ್ಚಿನವು, ಅಪಘಾತಗಳನ್ನು ಹೊರತುಪಡಿಸಿ ಶರೀರದೊಳಗೆ ಆದ ವ್ಯತ್ಯಾಸದಿಂದ ಆದಂತಹುಗಳು. ಇದಕ್ಕೆ ಕಾರಣ, ನಮ್ಮ ಆಹಾರದ ಆಯ್ಕೆ ಮತ್ತು ತಯಾರಿಕಾ ನಿಯಮಗಳ ವ್ಯತ್ಯಾಸ.  ವ್ಯಾಧಿಗಳಿಗೆ ಆಹಾರದ ಅನಿಯಮಗಳು ಕಾರಣ ಎಂದಾದರೆ, "ಕಾರಣ ತ್ಯಾಗ ಮಾಡಬೇಕಲ್ಲವೇ?" ನಿತ್ಯವೂ ತೊಂದರೆ ಕೊಡುವ ಯಾವುದನ್ನೇ ಆದರೂ ನಾವು ರಿಪೇರಿ ಅಥವಾ ರೀಪ್ಲೇಸ್ ಮಾಡುತ್ತೇವೆ ಅಲ್ಲವೇ? ಹಾಗೆಯೇ, ಸಹಜ ಜೀವನಕ್ಕೆ ಅಡ್ಡಿಪಡಿಸುವ ಈ ಆಹಾರ ಅನಿಯಮಗಳನ್ನು ತ್ಯಜಿಸುವುದೇ ರಿಪೇರಿ‌ ಎಂದಾಗುತ್ತದೆ, ಇದನ್ನೇ ಆಚಾರ್ಯರು, "ನಿದಾನ ಪರಿಮಾರ್ಜನಮೇವ ಚಿಕಿತ್ಸಾ" ಎಂದಿದ್ದಾರೆ.  ಅಂದರೆ, "ಚಿಕಿತ್ಸೆ ಎಂದರೆ ಕಾರಣಗಳ ತ್ಯಾಗ" ಎಂದರ್ಥ. ಏಕೆ ತ್ಯಾಗ ಮಾಡಲೇಬೇಕು? ಎಂದರೆ ತ್ಯಾಗ ಮಾಡದಿದ್ದರೆ ಅದೇ ಹಂತದಲ್ಲಿ ಇರುತ್ತೇವೆ. ಮಗು ಹತ್ತನೇ ತರಗತಿಯನ್ನು ತ್ಯಾಗ ಮಾಡಿದ್ದರೆ, ಹನ್ನೊಂದಕ್ಕೆ ವರ್ಗ, ಇಲ್ಲದಿದ್ದರೆ ಅಲ್ಲೇ ಇರುತ್ತದೆ ಅಥವಾ ಶಿಕ್ಷಣದಿಂದಲೇ ಹೊರಬರುತ್ತದೆ.  ಹಾಗೆಯೇ, ರೋಗದ‌ ಕಾರಣವಾದ ಆಹಾರ ತ್ಯಾಗ ಅಥವಾ ತಪ್ಪು ತಯಾರಿಕಾ ವಿಧಾನ ತ್ಯಾಗ ಮಾಡದಿದ್ದರೆ, ರೋಗದಲ್ಲೇ ಉಳಿಯುತ್ತೇವೆ ಅಥವಾ ಶರೀರದಿಂದಲೇ ಹೊರಹೋಗುವ ಪ್ರಕ್ರಿಯೆ ಆರಂಭವಾಗುತ್ತದೆ. ಅಂದರೆ, ಮರಣದೆಡೆಗೆ ಸಾಗುತ್ತೇವೆ.  ಹೀಗಾಗಿ, ಆಯುರ್ವೇದ ವೈದ್ಯ ತನ್ನೆಲ್ಲಾ ಶ್ರಮವನ್ನು ಕಾರಣ ಹುಡುಕುವುದರ ಕಡೆಗೇ ಹಾಕುತ್ತಾನೆ. ಶತಾಯಗತಾಯ ರೋಗಿಯಿಂದ ಅದನ್ನು ಬಿಡಿಸಲು ಪ್ರಯತ್ನಿಸುತ್ತಾನೆ.  ಅಂತವನು ಮಾತ್ರ ನಿಜವಾದ ವೈದ್ಯನಲ್ಲವೇ?•••••••••••••••••••••••••••••••••••••••  ನೀವು ಗಮನಿಸಲೇಬೇಕಾದ ಅಂಶ ಎಂದರೆ, ಯಾವಾಗಲೂ ಔಷಧ ಆರೋಗ್ಯ ಕೊಡುತ್ತದೆ ಎಂಬ "ಸುಳ್ಳ"ನ್ನು ಸೂಕ್ಷ್ಮವಾಗಿ ಗುರುತಿಸಿಕೊಳ್ಳಬೇಕು. ಆಯುರ್ವೇದ ಎಂದರೆ ಪಥ್ಯ ಎಂದು ಮೂಗು ಮುರಿಯದಿರುವುದು.  ಎರಡು ವಿಷಯಗಳನ್ನು ನೆನಪಿಡಿ -- • ಇದು ಪಥ್ಯವಲ್ಲ, ಈಗಾಗಲೇ ಕೆಟ್ಟಿರುವ ಮತ್ತು ಹೆಚ್ಚಿನ‌ ಜನ‌ ಅದನ್ನು "ಮಾಮೂಲಿ ಆಹಾರ" ಎಂದು ಸೇವಿಸುತ್ತಿರುವ ಆಹಾರದ ಬಗ್ಗೆ ನೈಜ ತಿಳಿವಳಿಕೆಯನ್ನು ಪಡೆಯಿರಿ. ಮತ್ತು• ಆರೋಗ್ಯಕ್ಕಾಗಿ ಇವುಗಳ ಪಾಲನೆ ಅನಿವಾರ್ಯ, ಇದಕ್ಕೆ ಯಾವುದೇ ಅಡ್ಡ ಅಥವಾ ಹತ್ತಿರದ ಮಾರ್ಗಗಳಿಲ್ಲ.•••••••••••••••••••••••••••••••••••••••   ಧನ್ಯವಾದಗಳು   

Tue, 03 Oct 2023

Don't set alarm for wakeup morning  Set alarm to sleep at night
Don't set alarm for wakeup morning Set alarm to sleep at night
•••••••••••••••••••••••••••••••••••••••  ಅಲಾರಾಮ್ ಇಟ್ಟು ಏಳುವುದಲ್ಲ; ಮಲಗುವುದು ಆರೋಗ್ಯಕರ....!!!  ಅಚ್ಚರಿಯೇ? ಆದರೆ, ಇದೊಂದು ಆಯುರ್ ವೈದ್ಯಕೀಯ ಸತ್ಯ ಮಾಹಿತಿ.  1) ನಮ್ಮನ್ನು ಎಚ್ಚರಿಸಲು ಇರುವ ಸಾಧನವೇ ಅಲಾರಾಮ್, ಆದರೆ ಅದು ನಿದ್ದೆಯಿಂದ ಎಚ್ಚರಿಸಲು ಎಂದಿಗೂ ಅಲ್ಲ....!  2) ಅಪೂರ್ಣ ನಿದ್ದೆಯಿಂದ ಎಚ್ಚರಿಸಲು ಅಲಾರಾಮ್ ಬಳಸಿದರೆ, ಮೆದುಳಿಗೆ ಶಾಕ್ ಆಗುತ್ತದೆ, ಮೆದುಳಿನ ಅನೇಕ ನರಗಳು ಶಾಶ್ವತವಾಗಿ ಕಾರ್ಯಕ್ಷಮತೆ ಕಳೆದುಕೊಳ್ಳುತ್ತವೆ...  3) ಬೇಗ ಏಳುವುದು ಖಂಡಿತಾ ಆರೋಗ್ಯಕರ, ಆದರೆ ನೆನಪಿಡಿ, ಅಪೂರ್ಣ ನಿದ್ದೆಯಿಂದ ಏಳುವುದು ಮಹಾ ಹಾನಿಕರ.  4) ಪೂರ್ಣ ನಿದ್ದೆ ಆದ ವ್ಯಕ್ತಿಯನ್ನು ಎಚ್ಚರಿಸಲು ಅಲಾರಾಮ್ ಬೇಕಿಲ್ಲ, ಅದೊಂದು ಸಹಜ ಪ್ರಕ್ರಿಯೆ.  5) ನಿದ್ದೆಯ ಸಮಯವನ್ನು ಮೀರಿ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳುವ ನಮ್ಮನ್ನು, ನಿದ್ದೆಗೆ ಸಮಯವಾಯ್ತು ಎಂದು ಎಚ್ಚರಿಸಲು ಅಲಾರಾಮ್ ಬಳಸಿ, ಮಲಗುವ ವ್ಯವಸ್ಥೆ ಮಾಡಿಕೊಳ್ಳಿ  6) ಬೇಗ ಏಳಬೇಕೆಂದರೆ ಮಾಡಬೇಕಾದ ಮೊಟ್ಟ ಮೊದಲ ಕೆಲಸ ಎಂದರೆ ಬೇಗ ಮಲಗುವುದು, ಅಲ್ಲವೇ?  7) ಅಲಾರಾಮ್ ಘಂಟೆಯ ಧ್ವನಿಯಿಂದ ಶಾಕ್ ಆದ ಮೆದುಳಿನ ಆಯಾಸ ಓದಲು ಸಮರ್ಥವಲ್ಲ, ಆದ್ದರಿಂದ ನೀವು ಎಚ್ಚರಗೊಳಿಸಿದರೂ ಆಗ ಮಕ್ಕಳು ತೂಕಡಿಸುತ್ತವೆಯೇ ಹೊರತೂ ವಿಷಯಗ್ರಹಣೆ ಮಾಡಲಾರವು...  8) ಬ್ರಾಹ್ಮಿ ಮುಹೂರ್ತವು ಆ ದಿನದ ಕೆಲಸಗಳನ್ನು ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಲು ಅತ್ಯಂತ ಶ್ರೇಯಸ್ಕರ. ಕೆಲಸ ಮಾಡಲು ಅಲ್ಲ.  9) ಬ್ರಾಹ್ಮಿ ಮುಹೂರ್ತದಲ್ಲಿ ಎಚ್ಚರಗೊಂಡರೂ ಸಹ, ಜೀರ್ಣಾಜೀರ್ಣದ ಕಡೆ ಗಮನಕೊಟ್ಟು, ಏಳಬೇಕೇ?ಅಥವಾ ಇನ್ನೂ ಮಲಗಬೇಕೇ? ಎಂದು ನಿರ್ಧರಿಸಬೇಕು.  10) ಸಹಜವಾಗಿ ಎಚ್ಚರಗೊಂಡರೂ ಸಹ ಹಿಂದಿನ‌ ರಾತ್ರಿಯ ಆಹಾರ ಜೀರ್ಣವಾಗಿದ್ದರೆ ಎದ್ದುಬಿಡಿ. ಜೀರ್ಣವಾಗಿಲ್ಲ ಎನಿಸಿದರೆ, ಬಲವಂತದಿಂದ ಎದ್ದು ಕೆಲಸ ಆರಂಭಿಸುವ ಬದಲು ನಿದ್ದೆಯನ್ನು ಪೂರ್ಣಗೊಳಿಸಿ.  ಆಹಾರ ಜೀರ್ಣಗೊಂಡರೆ, ಮಲಪ್ರವೃತ್ತಿ ಸಹಜವಾಗಿ ಆಗುತ್ತದೆ, ಸಹಜ ಮಲಪ್ರವೃತ್ತಿ ಹಸಿವನ್ನು ಹೆಚ್ಚಿಸುತ್ತದೆ, ಹೆಚ್ಚಿದ ಹಸಿವಿನ ಅಗ್ನಿ ಆಹಾರವನ್ನು ಪಚಿಸುತ್ತದೆ, ಶರೀರಕ್ಕೆ ಬಲ ತರುತ್ತದೆ ಮತ್ತು ರೋಗಗಳನ್ನು ಭಸ್ಮ ಮಾಡುತ್ತದೆ. ಆದ್ದರಿಂದ ನಿನ್ನೆಯ ಆಹಾರ ಜೀರ್ಣವಾಗುವುದು ಅತ್ಯಂತ ಮುಖ್ಯ, ಅದು ಸಂಪೂರ್ಣ ನಿದ್ದೆಯಿಂದ ಮಾತ್ರ ಸಾಧ್ಯ!ಧನ್ಯವಾದಗಳು •••••••••••••••••••••••••••••••••••••••

Tue, 03 Oct 2023

Fermented food is dangerous
Fermented food is dangerous
   ಬೇಯಿಸಿ ರಾತ್ರಿಕಾಲ ಇಟ್ಟು, ಬೆಳಗಾದ ಮೇಲೆ, ತಂಗಳಾದ ಮೇಲೆ ಉಪಯೋಗಿಸಬಾರದು. ಇವು ವಿಷಕಾರಿಗಳು.  ಸೇವಿಸುವ ಆಹಾರವನ್ನು ರಕ್ಷಣೆ ಮಾಡುವ 'ಅನ್ನರಕ್ಷಾವಿಧಿ' ಆಧ್ಯಾಯದಲ್ಲಿ ಆಚಾರ್ಯ ವಾಗ್ಭಟರು ತಂಗಳು ತಿನ್ನುವುದು ವಿಷಕಾರಿ ಎಂದು ಸ್ಪಷ್ಟ ಮಂತ್ರಗಳಲ್ಲಿ ಹೇಳಿದ್ದಾರೆ.••••••••••••••••••••••••••••••••••••••  ರಾತ್ರಿ ಅನ್ನದಿಂದ B12 ಸಿಗುತ್ತದೆ, ಒಳ್ಳೆಯದು ಎನ್ನುತ್ತಾರಲ್ಲವೇ  ಇದರಲ್ಲಿ ಒಂದು ತಪ್ಪು ಇದೆ, ಕೆಲವು ಬ್ಯಾಕ್ಟೀರಿಯಾಗಳು ಬೆಳೆದಿರುವ ಕಾರಣ, ಅವುಗಳು B12 ತಯಾರಿಸಿರುತ್ತವೆ. ತಂಗಳನ್ನದಲ್ಲಿ B12 ಇರುತ್ತದೆ ಎನ್ನಬಹುದೇ ಹೊರತೂ 'ಸಿಗುತ್ತದೆ' ಎನ್ನಬಾರದು.  ಇದ್ದರೂ ಏಕೆ ನಮಗೆ ಸಿಗುವುದಿಲ್ಲ, ಎಂದರೆ ಯಾವುದೇ ವಸ್ತು ಅಥವಾ ಧಾನ್ಯಗಳಲ್ಲಿ ಇರುವ ಯಾವುದೇ ಗುಣ-ದೋಷಗಳು ಎಂದಿಗೂ ಯಥಾವತ್ತಾಗಿ ನಮಗೆ ಸಿಗುವುದಿಲ್ಲ. ವಿಶೇಷವಾಗಿ ಮಾನವ ಶರೀರದ ಪೋಷಣೆ ವಿಭಿನ್ನವಾಗಿದೆ. ಮೊದಲು ಮನಸ್ಸು ಏಕಾಗ್ರಗೊಳ್ಳದೇ ಯಾವುದೇ ವಿಷಯ ನಮ್ಮ ಮನಸ್ಸನ್ನೂ ಮತ್ತು ಯಾವುದೇ ಆಹಾರ ನಮ್ಮ ಶರೀರವನ್ನು ಸೇರದು.  ಏಕೆ ತಿನ್ನಬಾರದು?:  ತಂಗಳನ್ನವು ಮನಸ್ಸಿನ ತಮೋಗುಣವನ್ನು ಹೆಚ್ಚಿಸುತ್ತದೆ, ತಮೋಗುಣವು ಏನನ್ನೇ ಆಗಲಿ ಸ್ವೀಕರಿಸುವುದು ಅಸಾಧ್ಯ. ಪಾಠ ಕೇಳುವಾಗ ತಮೋಗುಣದ ಕಾರಣ ಅರೆನಿದ್ದೆಯಲ್ಲಿದ್ದರೆ ಅಥವಾ ತೂಕಡಿಕೆಯಲ್ಲಿದ್ದರೆ ಒಂದೇ ಒಂದು ಶಬ್ದವೂ ಮನೋಬುದ್ಧಿಯನ್ನು ಸೇರುವುದಿಲ್ಲ.  ಹಾಗೆಯೇ, ರಜೋಗುಣ ವರ್ಧನೆ ಆಗಿ ಮನಸ್ಸು ಚಂಚಲವಾಗಿ ಎಲ್ಲೆಲ್ಲೋ ಸುತ್ತುತ್ತಾ ಇದ್ದರೆ, ನಿದ್ದೆ ಮಾಡದಿದ್ದರೂ ಪಾಠ ಮನಕ್ಕೆ ಇಳಿದಿರುವುದಿಲ್ಲ  ಕೆಲವು ತಂಗಳು ಆಹಾರಗಳು 'ತಮಸ್ಸನ್ನು ವರ್ಧಿಸುವವು' ಉದಾ: ತಂಗಳು ಅನ್ನ  ಕೆಲವು ತಂಗಳು ಆಹಾರಗಳು 'ರಜೋಗುಣವನ್ನು ವರ್ಧಿಸುತ್ತವೆ' ಉದಾ: ದೋಸೆ, ಇಡ್ಲಿ  ಇನ್ನೊಂದು ವಿಷಯ ಎಂದರೆ -- ತಂಗಳನ್ನದಿಂದ ಮಾತ್ರ ಅಪ್ರಯೋಜನ ಎಂದು ಭಾವಿಸಬಾರದು. ಬೇರೆ ಸಮಯದಲ್ಲಿಯೂ ಸೇವಿಸಿದ ಅತ್ಯಂತ ಗುಣವಾನ್ ಆಹಾರದ ಸೂಕ್ಷ್ಮಗುಣಗಳನ್ನೂ ಸಹ ದೇಹ ಹೀರದೇ ನಮಗೆ ಅತ್ಯಂತ ಹಾನಿಯನ್ನು ತರುತ್ತದೆ.  ಗಮನಿಸಿ ನೋಡಿ -- ತಂಗಳು ತಿನ್ನುವವರ ಮನಸ್ಸು ಸಣ್ಣ ಸಣ್ಣ ವಿಷಯಕ್ಕೆ ಭಯ ಅಥವಾ ಕಿರಿಕಿರಿಗೊಳ್ಳುತ್ತದೆ. ಕೆಲವರಿಗೆ ಅಪಸ್ಮಾರ ರೋಗವನ್ನೂ ತರುತ್ತದೆ...   ಹಾಗಾಗಿ, ತಂಗಳನ್ನು ರಾಸಾಯನಿಕ ದೃಷ್ಟಿಯಿಂದ ನೋಡಬಾರದು...     ಧನ್ಯವಾದಗಳು••••••••••••••••••••••••••••••••••••••

Tue, 03 Oct 2023

All blogs