Published - Tue, 03 Oct 2023

Solutions for Diabetes in kids

 ಅಮೃತಾತ್ಮರೇ, ನಮಸ್ಕಾರ   


  ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ, ಸಂಚಿಕೆ-648

    

•••••••••••••••••••••••••••••••••••••••

ಮೊದಲ ಸೂಚನೆ:

  ಇವರಿಗೆ ಸಾಮಾನ್ಯ ಮಧುಮೇಹಿಗಳಂತೆ ಚಿಕಿತ್ಸೆ ಮತ್ತು ಉಪಚಾರಗಳನ್ನು ಮಾಡಬಾರದು...

•••••••••••••••••••••••••••••••••••••••

  ಜನ್ಮಾರಭ್ಯ ಬರುವ ಮಧುಮೇಹಕ್ಕೆ ಮೇದಸ್ಸಿನ ವೃದ್ಧಿ(ಸ್ನಿಗ್ಧಾಂಶ, ಕ್ಲೇದ, ಸಕ್ಕರೆ ಅಂಶ) ಕಾರಣವಲ್ಲ. ಬದಲಾಗಿ ಮೇದಧಾತುವಿನ ಕ್ಷಯ ಕಾರಣವಾಗಿದೆ. ಶೇ.5 ರಷ್ಟು ಮಕ್ಕಳಿಗೆ ಇನ್ಸುಲಿನ್ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬೇಕಾಗಬಹುದು, ಉಳಿದವರಿಗೆ ಅಲ್ಲ.


  ಚಿಕಿತ್ಸೆ ಅತ್ಯಂತ ನಿರ್ದಿಷ್ಟವಾಗಿ ಪ್ರತಿ ಮಗುವಿಗೆ ಭಿನ್ನವಾಗಿ ಇರಬೇಕು, ಪ್ರತಿ ತಿಂಗಳೂ ವಿಭಿನ್ನ ಪ್ರಮಾಣದ ಔಷಧಿ ಉಪಚಾರಗಳು ಬೇಕಾಗಬಹುದು. ಇಲ್ಲಿ ಯಶಸ್ಸಿಗೆ ಬಹಳ ಅಡ್ಡಿಗಳು ಬರುತ್ತವೆ, ಅಜೀರ್ಣ ಎಂಬುದು ಅದರಲ್ಲಿ ಬಹು ದೊಡ್ಡ ಅಡ್ಡಿ. 

ಸೂಕ್ಷ್ಮದೃಷ್ಟಿಯ ವೈದ್ಯ ಮಾತ್ರ ಆಗಾಗ ನಿರ್ವಹಿಸಬಲ್ಲ.


  ಶೇ.60 ಕ್ಕಿಂತಲೂ ಹೆಚ್ಚು ಬಲ ಬಂದಮೇಲೆ, ಚಿಕಿತ್ಸೆ ಸರಳವಾಗುತ್ತಾ ಸಾಗುತ್ತದೆ. ಏಕೆಂದರೆ ಒಮ್ಮೆ ಸಾರ ಅಥವಾ ಸಶಕ್ತ ಮೇದಸ್ಸು ತನ್ನ ಸ್ಥಾನದಲ್ಲಿ ನೆಲೆಯೂರಿದರೆ ಇನ್ನು ಬೇಗ ಬೇಗ ತನ್ನನ್ನು ತಾನೇ ನಿವ೯ಹಿಸಿಕೊಳ್ಳುತ್ತದೆ, ಅಲ್ಲಿಯವರೆಗೆ ಹೋರಾಟ ಇದ್ದದ್ದೇ.


  ಇದು ಹೇಗೆ ಎಂದರೆ, ಬೆಳೆವ ಮಗುವನ್ನು ತಾಯಿ ಪೋಷಣೆ ಮಾಡಿದರೆ, ಸದೃಢವಾದ ಮಗು ಅದೇ ತಾಯಿಯನ್ನು ತಾನು ಪೋಷಣೆ ಮಾಡಿದಂತೆ!


  ಈ ಸಿದ್ಧಾಂತಗಳು, ಚಿಕಿತ್ಸಾ ಸೂಕ್ಷ್ಮತೆಗಳನ್ನು ವೈದ್ಯರ ಪಾಲಿಗೆ ಬಿಟ್ಟು, ಜನಸಾಮಾನ್ಯರು ಹೇಗೆ ಸಹಕರಿಸಬೇಕೆಂಬುದನ್ನು ನೋಡೋಣ...


• ಆಯುರ್ವೇದ ವೈದ್ಯರು ಸೂಚಿಸುವ ಆಹಾರ ಕ್ರಮ ಮತ್ತು ಉಪಚಾರಗಳನ್ನು ಅಲೋಪತಿಯ ಜ್ಞಾನ, ಇಂಟರ್‌ನೆಟ್ ಮಾಹಿತಿ, ನಿಮ್ಮ ತಿಳಿವಳಿಕೆಯೊಂದಿಗೆ ತರ್ಕ ಮಾಡಿ, ಸ್ವಲ್ಪ ನಿಮ್ಮದು, ಸ್ವಲ್ಪ ವೈದ್ಯರ ಸಲಹೆ ಹೀಗೆ ಮಾಡದಿರಿ. ಇಲ್ಲಿ ಈ ತರ್ಕ ನಡೆಯದು, ಏಕೆಂದರೆ IDDM ನ ಬಗ್ಗೆ ಇದುವರೆಗೆ ಸಿಗುವ ಮಾಹಿತಿಗಳೆಲ್ಲಾ, ಪ್ಯಾಂಕ್ರಿಯಾಸ್ ಅಥವಾ ಇನ್ಸುಲಿನ್ ನಿಷ್ಕ್ರಿಯ ಆದ ಬಳಿಕದ ಮಾಹಿತಿ ಮತ್ತು ಉಪಚಾರಗಳು ಮಾತ್ರ. ಇಲ್ಲಿ ಮಾಡಲು ಹೊರಟಿರುವುದು ಆ ಪ್ಯಾಂಕ್ರಿಯಾಸ್ ಹೇಗೆ ಹಾಳಾಯ್ತು ಮತ್ತು ಅದನ್ನು ಮರುಪೂರಣ ಮಾಡುವ ಚಿಕಿತ್ಸೆ. ಒಂದಕ್ಕೊಂದು ತದ್ವಿರುದ್ಧವಾಗಿ ಕಾಣುತ್ತವೆ ಹಾಗಾಗಿ, ಪೂರ್ವಾಗ್ರಹ ಇಲ್ಲದೇ ವಿಚಾರವನ್ನು ತಿಳಿದುಕೊಳ್ಳಿ, ಆದರೆ, ಸಧ್ಯ ಇರುವ ಮೇಲ್ಮಟ್ಟದ ಮಾಹಿತಿಯ ಅನುಸಾರ ಉಪಚಾರ ಮಾಡುವ ಸಾಹಸವು ಚಿಕಿತ್ಸಾ ಸಾಫಲ್ಯವನ್ನು ಕೊಡುವುದಿಲ್ಲ.


• ಶೇ.60 ಕ್ಕಿಂತ ಹೆಚ್ಚು ಗುಣ ಆಗುವವರೆಗೆ ಸ್ವಲ್ಪವೂ ಸಿಹಿ ಪದಾರ್ಥಗಳನ್ನು ಕೊಡಬಾರದು, ಸಕ್ಕರೆ ಅಂಶ ಕಡಿಮೆ ಆದರೆ?! ಎಂಬ ಪ್ರಶ್ನೆ ಬಂದರೆ, ಆಯುರ್ವೇದ ಚಿಕಿತ್ಸೆ ಪ್ರಾರಂಭ ಆದ ದಿನದಿಂದ ಅಂತಹ ಅವಸ್ಥೆ ಎಂದಿಗೂ ಬಾರದು(ನೀವಾಗಿ ಅಪಥ್ಯ ಮಾಡದಿದ್ದರೆ ಮಾತ್ರ).


• ಅಗ್ನಿವರ್ಧಕವಾದ ಕಾರಣ ತುಪ್ಪವನ್ನು ಕೊಡಬೇಕಾಗುತ್ತದೆ, ಇಲ್ಲಿ ಔಷಧ ಸಿದ್ಧ ತುಪ್ಪಗಳನ್ನೇ ಪ್ರಧಾನವಾಗಿ ಬಳಸಬೇಕು. ಅಂಗಡಿಯಲ್ಲಿ ಸಿಗುವ ಪ್ಯಾಕ್ಡ್ ತುಪ್ಪಗಳು ಅಪಾಯಕರ.


• ಇನ್ಸುಲಿನ್ ಮೊದಲ ತಿಂಗಳಿನಿಂದಲೇ ಶೇ.10 ರಷ್ಟು ಕಡಿಮೆ ಮಾಡಲಾಗುತ್ತದೆ, ಒಂದೆರಡು ತಿಂಗಳಲ್ಲಿ ಶೇ.50 ರಷ್ಟು ಕಡಿಮೆ ಮಾಡಬಹುದು, ಎಲ್ಲವೂ ಕೇವಲ ಔಷಧಿಯ ಮೇಲೆ ಅವಲಂಬಿತವಲ್ಲ. ಆಹಾರ-ವಿಹಾರ ನಿಯಮ ಅತೀ ಮುಖ್ಯ.


• ತರ್ಕ ತಿಳಿಯದ ಪುಟ್ಟ ಮಗು, ಹೇಳಿದಂತೆ ಪಾಲಿಸುವ ಪೋಷಕರು ಇದ್ದರೆ ಚಿಕಿತ್ಸೆ ಸುಲಭ. ಮಗು ಬೌದ್ಧಿಕವಾಗಿ ಬೆಳೆದು, ಚಿಂತೆಗೆಡುವುದು, ರಾತ್ರಿ ನಿದ್ದೆಗೆಡುವುದು, ತನ್ನದೇ ಆಲೋಚನೆಯನ್ನು ಹೇರಲು ಪ್ರಾರಂಭಿಸಿಕೊಂಡರೆ, ವೈದ್ಯರು ಮತ್ತು ಪೋಷಕರು ಮಾಡುವ ಸರ್ವ ಪ್ರಯತ್ನವೂ ವ್ಯರ್ಥವಾಗಿ ಪರಿಣಮಿಸುತ್ತವೆ. ಅಂತವರಲ್ಲಿ ಇನ್ಸುಲಿನ್ ಕಡಿಮೆ ಮಾಡಬಹುದಷ್ಟೇ, ನಿಲ್ಲಿಸುವುದು ಅಸಾಧ್ಯ.


• ಇವರಲ್ಲಿ ಸಕ್ಕರೆ ಅಂಶ ತುಸು ಹೆಚ್ಚಾಗಿ ಇಟ್ಟುಕೊಳ್ಳುವುದು ಮುಖ್ಯ, ಏಕೆಂದರೆ ಅದು ನಿಧಾನವಾಗಿ ಶುದ್ಧ ಮೇದಸ್ಸನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಪೂರ್ಣ ಸಂಗ್ರಹವಾದ ನಂತರ ತಾನಾಗಿಯೇ ಸಹಜತೆಗೆ ಬರುತ್ತದೆ.


• ದಯಮಾಡಿ ಈ ಮಾಹಿತಿಯನ್ನು ಗಂಭಿರವಾಗಿ ಪರಿಗಣಿಸಿ - ಲ್ಯಾಬೋರೇಟರಿಗಳಲ್ಲಿ ಹೇಳಿರುವ ಸಕ್ಕರೆಯ ನಾರ್ಮಲ್ ಅಂಶ - ಅದು ನಮ್ಮ ಆರೋಗ್ಯವನ್ನು ಸರಿಮಾಡುವುದಕ್ಕಿಂತ ಕಾಣದ ಕೈಗಳ ವ್ಯಾಪಾರದ ಆಟವಾಗಿದೆ. ಅದರ ನಾರ್ಮಲ್ ಅಂಶವನ್ನು ಕಡಿಮೆ ಮಾಡಿದಷ್ಟೂ ವ್ಯಾಪಾರ ಜೋರು ಅಲ್ಲವೇ? ಹೇಗೆ ಇರಬೇಕೆಂದರೆ ನಿಮ್ಮ ಶರೀರ ಯಾವ ಲಕ್ಷಣವನ್ನೂ ತೋರುತ್ತಿಲ್ಲ ಎಂದರೆ ನಿಮ್ಮ RBS 200-250 ಇದ್ದರೂ ಅದು ನಾರ್ಮಲ್. ನೀವು ಆರೋಗ್ಯದಿಂದ ಇರುವುದು ಮುಖ್ಯವೇ ಹೊರತು, ನಿಮಗೆ ಕೊಡುವ ರಿಪೋರ್ಟ್ ಅಲ್ಲ!!


• ಮಗುವಿಗೆ ಸರಿಯಾದ ಸಮಯಕ್ಕೆ ನಿದ್ದೆಗೆ ಬಿಡಿ, ಚೆನ್ನಾಗಿ ನಿದ್ದೆ ಮಾಡಲಿ, ಆತಂಕವನ್ನು ಒಟ್ಟಾರೆ ಹಾಕಲೇಬೇಡಿ. ಮಗುವಿನ ಮೇದಸ್ಸು ತೆಳುವಾಗಿ, ಅಶಕ್ತವಾಗಿ ಇರುವ ಕಾರಣ ಒತ್ತಡ ಎನಿಸುವ ಚಟುವಟಿಕೆಗಳನ್ನು ಮಾಡಲು ಒತ್ತಾಯಿಸಬೇಡಿ, ವಿಶೇಷವಾಗಿ ಶಾಲಾ ಅಂಕಪಟ್ಟಿಯ ವರ್ಧನೆಗೆ ತೊಡಗಬೇಡಿ, ಮಾಹಿತಿಗಿಂತ ಸ್ಫೂರ್ತಿ ಮುಖ್ಯ.


• ತಾಯಂದಿರೇ, ಬೆಳಗಿನ ಉಪಾಹಾರದ ಬಗ್ಗೆ ವಿಶೇಷ ಗಮನ ಇರಲಿ. ಇಡೀ ಚಿಕಿತ್ಸಾ ಅವಧಿಯಲ್ಲಿ ಒಮ್ಮೆ ಕಲಸನ್ನಗಳು, ಫರ್ಮಂಟೆಡ್ ಆಹಾರಗಳಾದ ಮಾಮೂಲಿ ದೋಸೆಗಳನ್ನು ಕೊಟ್ಟರೂ ಅರ್ಧದಲ್ಲಿ ಕೈ ಕತ್ತರಿಸಿಕೊಂಡಂತೆಯೇ ಸರಿ. ನೀರುದೋಸೆ ಕೊಡಬಹುದು, ಅಕ್ಕಿ ಕಡುಬು ಕೊಡಬಹುದು, ತೆಳುವಾಗಿ, ಮೃದುವಾಗಿ ಇರುವ ಪಲಾವ್, ಗೋಧಿ ಉಪ್ಪಿಟ್ಟು ಕೊಡಬಹುದು.


• ಹಿಂದಿನ ದಿನದ ಆಹಾರಗಳು, ಪ್ಯಾಕ್ಡ್ ತಿಂಡಿಗಳು, ಬೇಕರಿ ಪದಾರ್ಥಗಳು ಸರ್ವದಾ ಬೇಡ


• ಹಗಲು ನಿದ್ದೆ, ರಾತ್ರಿ ಜಾಗರಣಗಳು ಅತ್ಯಂತ ನಿಷಿದ್ಧ.

ಹೀಗೆ, ಸೂಕ್ಷ್ಮತೆಯಿಂದ ಪಾಲಿಸಿ, ಒಮ್ಮೆ ಮೇದಸ್ಸು ಸ್ಥಿರವಾಗಲು ಬಿಡಿ, ನಂತರ ಸಾಮಾನ್ಯ ಜೀವನ ಮಾಡಬಹುದು...

•••••••••••••••••••••••••••••••••••••••

  ಭಗವಂತನ ಶ್ರೀ ಕೃಪೆಯಿಂದ ಸರ್ವರಿಗೂ ಒಳಿತಾಗುತ್ತದೆ...


   ಧನ್ಯವಾದಗಳು 

Created by

Comments (0)

Search
Popular categories
Latest blogs
Why Ayurveda gives importance to food
Why Ayurveda gives importance to food
•••••••••••••••••••••••••••••••••••••••  ಆಹಾರದ ಜೊತೆಗಿನ ನೈಸರ್ಗಿಕ ಸಂಬಂಧ ಮತ್ತು ಅದಕ್ಕೆ ಕೊಡುವ ಗೌರವ ಎಂದರೆ ನಿಯಮಗಳು, ಇವುಗಳ ಜೊತೆಗಿನ ಪಯಣವೇ ಆರೋಗ್ಯ.  "ಆಹಾರ ಒಂದು ನಿರ್ಜೀವ ವಸ್ತುವಲ್ಲ, ಅದು ನಮ್ಮ ಅವ್ಯಕ್ತ ಶರೀರ!!"  ಈ ಶರೀರ ನಿತ್ಯವೂ ಸರಿಯಾಗಿ ನಡೆಯಲು ನಿರ್ದಿಷ್ಟ ನಿಯಮಗಳಿವೆ --  ಕಣ್ಣಿನಿಂದ ಮಾತ್ರ ನೋಡಲು ಸಾಧ್ಯ,  ನಾಲಿಗೆಯಿಂದ ಮಾತ್ರ ರುಚಿ ಸಾಧ್ಯ,  ಕೈಯಿಂದ ಕೆಲಸ ಸಾಧ್ಯ,  ಕಾಲಿನಿಂದ ನಡಿಗೆ ಸಾಧ್ಯ...  ಹಾಗೆಯೇ, ಆಹಾರಕ್ಕೂ ನಿರ್ದಿಷ್ಟ ನಿಯಮಗಳಿವೆ, ಆಹಾರದ ಈ ರೀತಿಯ ತಯಾರಿಕೆ ಮಾತ್ರ ನಮಗೆ ಇಂತಹ ಅನುಕೂಲವನ್ನು ಸೃಷ್ಟಿಸುತ್ತದೆ, ಇಲ್ಲದಿದ್ದರೆ ಸಹಜ ಚಲನೆಗೆ ಅನಾನುಕೂಲ ಮಾಡುತ್ತದೆ, ಅದೇ ಅನಾರೋಗ್ಯ ಅಥವಾ ವ್ಯಾಧಿ.•••••••••••••••••••••••••••••••••••••••  ಮಾನವನ‌ ವ್ಯಾಧಿಗಳಲ್ಲಿ ಹೆಚ್ಚಿನವು, ಅಪಘಾತಗಳನ್ನು ಹೊರತುಪಡಿಸಿ ಶರೀರದೊಳಗೆ ಆದ ವ್ಯತ್ಯಾಸದಿಂದ ಆದಂತಹುಗಳು. ಇದಕ್ಕೆ ಕಾರಣ, ನಮ್ಮ ಆಹಾರದ ಆಯ್ಕೆ ಮತ್ತು ತಯಾರಿಕಾ ನಿಯಮಗಳ ವ್ಯತ್ಯಾಸ.  ವ್ಯಾಧಿಗಳಿಗೆ ಆಹಾರದ ಅನಿಯಮಗಳು ಕಾರಣ ಎಂದಾದರೆ, "ಕಾರಣ ತ್ಯಾಗ ಮಾಡಬೇಕಲ್ಲವೇ?" ನಿತ್ಯವೂ ತೊಂದರೆ ಕೊಡುವ ಯಾವುದನ್ನೇ ಆದರೂ ನಾವು ರಿಪೇರಿ ಅಥವಾ ರೀಪ್ಲೇಸ್ ಮಾಡುತ್ತೇವೆ ಅಲ್ಲವೇ? ಹಾಗೆಯೇ, ಸಹಜ ಜೀವನಕ್ಕೆ ಅಡ್ಡಿಪಡಿಸುವ ಈ ಆಹಾರ ಅನಿಯಮಗಳನ್ನು ತ್ಯಜಿಸುವುದೇ ರಿಪೇರಿ‌ ಎಂದಾಗುತ್ತದೆ, ಇದನ್ನೇ ಆಚಾರ್ಯರು, "ನಿದಾನ ಪರಿಮಾರ್ಜನಮೇವ ಚಿಕಿತ್ಸಾ" ಎಂದಿದ್ದಾರೆ.  ಅಂದರೆ, "ಚಿಕಿತ್ಸೆ ಎಂದರೆ ಕಾರಣಗಳ ತ್ಯಾಗ" ಎಂದರ್ಥ. ಏಕೆ ತ್ಯಾಗ ಮಾಡಲೇಬೇಕು? ಎಂದರೆ ತ್ಯಾಗ ಮಾಡದಿದ್ದರೆ ಅದೇ ಹಂತದಲ್ಲಿ ಇರುತ್ತೇವೆ. ಮಗು ಹತ್ತನೇ ತರಗತಿಯನ್ನು ತ್ಯಾಗ ಮಾಡಿದ್ದರೆ, ಹನ್ನೊಂದಕ್ಕೆ ವರ್ಗ, ಇಲ್ಲದಿದ್ದರೆ ಅಲ್ಲೇ ಇರುತ್ತದೆ ಅಥವಾ ಶಿಕ್ಷಣದಿಂದಲೇ ಹೊರಬರುತ್ತದೆ.  ಹಾಗೆಯೇ, ರೋಗದ‌ ಕಾರಣವಾದ ಆಹಾರ ತ್ಯಾಗ ಅಥವಾ ತಪ್ಪು ತಯಾರಿಕಾ ವಿಧಾನ ತ್ಯಾಗ ಮಾಡದಿದ್ದರೆ, ರೋಗದಲ್ಲೇ ಉಳಿಯುತ್ತೇವೆ ಅಥವಾ ಶರೀರದಿಂದಲೇ ಹೊರಹೋಗುವ ಪ್ರಕ್ರಿಯೆ ಆರಂಭವಾಗುತ್ತದೆ. ಅಂದರೆ, ಮರಣದೆಡೆಗೆ ಸಾಗುತ್ತೇವೆ.  ಹೀಗಾಗಿ, ಆಯುರ್ವೇದ ವೈದ್ಯ ತನ್ನೆಲ್ಲಾ ಶ್ರಮವನ್ನು ಕಾರಣ ಹುಡುಕುವುದರ ಕಡೆಗೇ ಹಾಕುತ್ತಾನೆ. ಶತಾಯಗತಾಯ ರೋಗಿಯಿಂದ ಅದನ್ನು ಬಿಡಿಸಲು ಪ್ರಯತ್ನಿಸುತ್ತಾನೆ.  ಅಂತವನು ಮಾತ್ರ ನಿಜವಾದ ವೈದ್ಯನಲ್ಲವೇ?•••••••••••••••••••••••••••••••••••••••  ನೀವು ಗಮನಿಸಲೇಬೇಕಾದ ಅಂಶ ಎಂದರೆ, ಯಾವಾಗಲೂ ಔಷಧ ಆರೋಗ್ಯ ಕೊಡುತ್ತದೆ ಎಂಬ "ಸುಳ್ಳ"ನ್ನು ಸೂಕ್ಷ್ಮವಾಗಿ ಗುರುತಿಸಿಕೊಳ್ಳಬೇಕು. ಆಯುರ್ವೇದ ಎಂದರೆ ಪಥ್ಯ ಎಂದು ಮೂಗು ಮುರಿಯದಿರುವುದು.  ಎರಡು ವಿಷಯಗಳನ್ನು ನೆನಪಿಡಿ -- • ಇದು ಪಥ್ಯವಲ್ಲ, ಈಗಾಗಲೇ ಕೆಟ್ಟಿರುವ ಮತ್ತು ಹೆಚ್ಚಿನ‌ ಜನ‌ ಅದನ್ನು "ಮಾಮೂಲಿ ಆಹಾರ" ಎಂದು ಸೇವಿಸುತ್ತಿರುವ ಆಹಾರದ ಬಗ್ಗೆ ನೈಜ ತಿಳಿವಳಿಕೆಯನ್ನು ಪಡೆಯಿರಿ. ಮತ್ತು• ಆರೋಗ್ಯಕ್ಕಾಗಿ ಇವುಗಳ ಪಾಲನೆ ಅನಿವಾರ್ಯ, ಇದಕ್ಕೆ ಯಾವುದೇ ಅಡ್ಡ ಅಥವಾ ಹತ್ತಿರದ ಮಾರ್ಗಗಳಿಲ್ಲ.•••••••••••••••••••••••••••••••••••••••   ಧನ್ಯವಾದಗಳು   

Tue, 03 Oct 2023

Don't set alarm for wakeup morning  Set alarm to sleep at night
Don't set alarm for wakeup morning Set alarm to sleep at night
•••••••••••••••••••••••••••••••••••••••  ಅಲಾರಾಮ್ ಇಟ್ಟು ಏಳುವುದಲ್ಲ; ಮಲಗುವುದು ಆರೋಗ್ಯಕರ....!!!  ಅಚ್ಚರಿಯೇ? ಆದರೆ, ಇದೊಂದು ಆಯುರ್ ವೈದ್ಯಕೀಯ ಸತ್ಯ ಮಾಹಿತಿ.  1) ನಮ್ಮನ್ನು ಎಚ್ಚರಿಸಲು ಇರುವ ಸಾಧನವೇ ಅಲಾರಾಮ್, ಆದರೆ ಅದು ನಿದ್ದೆಯಿಂದ ಎಚ್ಚರಿಸಲು ಎಂದಿಗೂ ಅಲ್ಲ....!  2) ಅಪೂರ್ಣ ನಿದ್ದೆಯಿಂದ ಎಚ್ಚರಿಸಲು ಅಲಾರಾಮ್ ಬಳಸಿದರೆ, ಮೆದುಳಿಗೆ ಶಾಕ್ ಆಗುತ್ತದೆ, ಮೆದುಳಿನ ಅನೇಕ ನರಗಳು ಶಾಶ್ವತವಾಗಿ ಕಾರ್ಯಕ್ಷಮತೆ ಕಳೆದುಕೊಳ್ಳುತ್ತವೆ...  3) ಬೇಗ ಏಳುವುದು ಖಂಡಿತಾ ಆರೋಗ್ಯಕರ, ಆದರೆ ನೆನಪಿಡಿ, ಅಪೂರ್ಣ ನಿದ್ದೆಯಿಂದ ಏಳುವುದು ಮಹಾ ಹಾನಿಕರ.  4) ಪೂರ್ಣ ನಿದ್ದೆ ಆದ ವ್ಯಕ್ತಿಯನ್ನು ಎಚ್ಚರಿಸಲು ಅಲಾರಾಮ್ ಬೇಕಿಲ್ಲ, ಅದೊಂದು ಸಹಜ ಪ್ರಕ್ರಿಯೆ.  5) ನಿದ್ದೆಯ ಸಮಯವನ್ನು ಮೀರಿ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳುವ ನಮ್ಮನ್ನು, ನಿದ್ದೆಗೆ ಸಮಯವಾಯ್ತು ಎಂದು ಎಚ್ಚರಿಸಲು ಅಲಾರಾಮ್ ಬಳಸಿ, ಮಲಗುವ ವ್ಯವಸ್ಥೆ ಮಾಡಿಕೊಳ್ಳಿ  6) ಬೇಗ ಏಳಬೇಕೆಂದರೆ ಮಾಡಬೇಕಾದ ಮೊಟ್ಟ ಮೊದಲ ಕೆಲಸ ಎಂದರೆ ಬೇಗ ಮಲಗುವುದು, ಅಲ್ಲವೇ?  7) ಅಲಾರಾಮ್ ಘಂಟೆಯ ಧ್ವನಿಯಿಂದ ಶಾಕ್ ಆದ ಮೆದುಳಿನ ಆಯಾಸ ಓದಲು ಸಮರ್ಥವಲ್ಲ, ಆದ್ದರಿಂದ ನೀವು ಎಚ್ಚರಗೊಳಿಸಿದರೂ ಆಗ ಮಕ್ಕಳು ತೂಕಡಿಸುತ್ತವೆಯೇ ಹೊರತೂ ವಿಷಯಗ್ರಹಣೆ ಮಾಡಲಾರವು...  8) ಬ್ರಾಹ್ಮಿ ಮುಹೂರ್ತವು ಆ ದಿನದ ಕೆಲಸಗಳನ್ನು ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಲು ಅತ್ಯಂತ ಶ್ರೇಯಸ್ಕರ. ಕೆಲಸ ಮಾಡಲು ಅಲ್ಲ.  9) ಬ್ರಾಹ್ಮಿ ಮುಹೂರ್ತದಲ್ಲಿ ಎಚ್ಚರಗೊಂಡರೂ ಸಹ, ಜೀರ್ಣಾಜೀರ್ಣದ ಕಡೆ ಗಮನಕೊಟ್ಟು, ಏಳಬೇಕೇ?ಅಥವಾ ಇನ್ನೂ ಮಲಗಬೇಕೇ? ಎಂದು ನಿರ್ಧರಿಸಬೇಕು.  10) ಸಹಜವಾಗಿ ಎಚ್ಚರಗೊಂಡರೂ ಸಹ ಹಿಂದಿನ‌ ರಾತ್ರಿಯ ಆಹಾರ ಜೀರ್ಣವಾಗಿದ್ದರೆ ಎದ್ದುಬಿಡಿ. ಜೀರ್ಣವಾಗಿಲ್ಲ ಎನಿಸಿದರೆ, ಬಲವಂತದಿಂದ ಎದ್ದು ಕೆಲಸ ಆರಂಭಿಸುವ ಬದಲು ನಿದ್ದೆಯನ್ನು ಪೂರ್ಣಗೊಳಿಸಿ.  ಆಹಾರ ಜೀರ್ಣಗೊಂಡರೆ, ಮಲಪ್ರವೃತ್ತಿ ಸಹಜವಾಗಿ ಆಗುತ್ತದೆ, ಸಹಜ ಮಲಪ್ರವೃತ್ತಿ ಹಸಿವನ್ನು ಹೆಚ್ಚಿಸುತ್ತದೆ, ಹೆಚ್ಚಿದ ಹಸಿವಿನ ಅಗ್ನಿ ಆಹಾರವನ್ನು ಪಚಿಸುತ್ತದೆ, ಶರೀರಕ್ಕೆ ಬಲ ತರುತ್ತದೆ ಮತ್ತು ರೋಗಗಳನ್ನು ಭಸ್ಮ ಮಾಡುತ್ತದೆ. ಆದ್ದರಿಂದ ನಿನ್ನೆಯ ಆಹಾರ ಜೀರ್ಣವಾಗುವುದು ಅತ್ಯಂತ ಮುಖ್ಯ, ಅದು ಸಂಪೂರ್ಣ ನಿದ್ದೆಯಿಂದ ಮಾತ್ರ ಸಾಧ್ಯ!ಧನ್ಯವಾದಗಳು •••••••••••••••••••••••••••••••••••••••

Tue, 03 Oct 2023

Fermented food is dangerous
Fermented food is dangerous
   ಬೇಯಿಸಿ ರಾತ್ರಿಕಾಲ ಇಟ್ಟು, ಬೆಳಗಾದ ಮೇಲೆ, ತಂಗಳಾದ ಮೇಲೆ ಉಪಯೋಗಿಸಬಾರದು. ಇವು ವಿಷಕಾರಿಗಳು.  ಸೇವಿಸುವ ಆಹಾರವನ್ನು ರಕ್ಷಣೆ ಮಾಡುವ 'ಅನ್ನರಕ್ಷಾವಿಧಿ' ಆಧ್ಯಾಯದಲ್ಲಿ ಆಚಾರ್ಯ ವಾಗ್ಭಟರು ತಂಗಳು ತಿನ್ನುವುದು ವಿಷಕಾರಿ ಎಂದು ಸ್ಪಷ್ಟ ಮಂತ್ರಗಳಲ್ಲಿ ಹೇಳಿದ್ದಾರೆ.••••••••••••••••••••••••••••••••••••••  ರಾತ್ರಿ ಅನ್ನದಿಂದ B12 ಸಿಗುತ್ತದೆ, ಒಳ್ಳೆಯದು ಎನ್ನುತ್ತಾರಲ್ಲವೇ  ಇದರಲ್ಲಿ ಒಂದು ತಪ್ಪು ಇದೆ, ಕೆಲವು ಬ್ಯಾಕ್ಟೀರಿಯಾಗಳು ಬೆಳೆದಿರುವ ಕಾರಣ, ಅವುಗಳು B12 ತಯಾರಿಸಿರುತ್ತವೆ. ತಂಗಳನ್ನದಲ್ಲಿ B12 ಇರುತ್ತದೆ ಎನ್ನಬಹುದೇ ಹೊರತೂ 'ಸಿಗುತ್ತದೆ' ಎನ್ನಬಾರದು.  ಇದ್ದರೂ ಏಕೆ ನಮಗೆ ಸಿಗುವುದಿಲ್ಲ, ಎಂದರೆ ಯಾವುದೇ ವಸ್ತು ಅಥವಾ ಧಾನ್ಯಗಳಲ್ಲಿ ಇರುವ ಯಾವುದೇ ಗುಣ-ದೋಷಗಳು ಎಂದಿಗೂ ಯಥಾವತ್ತಾಗಿ ನಮಗೆ ಸಿಗುವುದಿಲ್ಲ. ವಿಶೇಷವಾಗಿ ಮಾನವ ಶರೀರದ ಪೋಷಣೆ ವಿಭಿನ್ನವಾಗಿದೆ. ಮೊದಲು ಮನಸ್ಸು ಏಕಾಗ್ರಗೊಳ್ಳದೇ ಯಾವುದೇ ವಿಷಯ ನಮ್ಮ ಮನಸ್ಸನ್ನೂ ಮತ್ತು ಯಾವುದೇ ಆಹಾರ ನಮ್ಮ ಶರೀರವನ್ನು ಸೇರದು.  ಏಕೆ ತಿನ್ನಬಾರದು?:  ತಂಗಳನ್ನವು ಮನಸ್ಸಿನ ತಮೋಗುಣವನ್ನು ಹೆಚ್ಚಿಸುತ್ತದೆ, ತಮೋಗುಣವು ಏನನ್ನೇ ಆಗಲಿ ಸ್ವೀಕರಿಸುವುದು ಅಸಾಧ್ಯ. ಪಾಠ ಕೇಳುವಾಗ ತಮೋಗುಣದ ಕಾರಣ ಅರೆನಿದ್ದೆಯಲ್ಲಿದ್ದರೆ ಅಥವಾ ತೂಕಡಿಕೆಯಲ್ಲಿದ್ದರೆ ಒಂದೇ ಒಂದು ಶಬ್ದವೂ ಮನೋಬುದ್ಧಿಯನ್ನು ಸೇರುವುದಿಲ್ಲ.  ಹಾಗೆಯೇ, ರಜೋಗುಣ ವರ್ಧನೆ ಆಗಿ ಮನಸ್ಸು ಚಂಚಲವಾಗಿ ಎಲ್ಲೆಲ್ಲೋ ಸುತ್ತುತ್ತಾ ಇದ್ದರೆ, ನಿದ್ದೆ ಮಾಡದಿದ್ದರೂ ಪಾಠ ಮನಕ್ಕೆ ಇಳಿದಿರುವುದಿಲ್ಲ  ಕೆಲವು ತಂಗಳು ಆಹಾರಗಳು 'ತಮಸ್ಸನ್ನು ವರ್ಧಿಸುವವು' ಉದಾ: ತಂಗಳು ಅನ್ನ  ಕೆಲವು ತಂಗಳು ಆಹಾರಗಳು 'ರಜೋಗುಣವನ್ನು ವರ್ಧಿಸುತ್ತವೆ' ಉದಾ: ದೋಸೆ, ಇಡ್ಲಿ  ಇನ್ನೊಂದು ವಿಷಯ ಎಂದರೆ -- ತಂಗಳನ್ನದಿಂದ ಮಾತ್ರ ಅಪ್ರಯೋಜನ ಎಂದು ಭಾವಿಸಬಾರದು. ಬೇರೆ ಸಮಯದಲ್ಲಿಯೂ ಸೇವಿಸಿದ ಅತ್ಯಂತ ಗುಣವಾನ್ ಆಹಾರದ ಸೂಕ್ಷ್ಮಗುಣಗಳನ್ನೂ ಸಹ ದೇಹ ಹೀರದೇ ನಮಗೆ ಅತ್ಯಂತ ಹಾನಿಯನ್ನು ತರುತ್ತದೆ.  ಗಮನಿಸಿ ನೋಡಿ -- ತಂಗಳು ತಿನ್ನುವವರ ಮನಸ್ಸು ಸಣ್ಣ ಸಣ್ಣ ವಿಷಯಕ್ಕೆ ಭಯ ಅಥವಾ ಕಿರಿಕಿರಿಗೊಳ್ಳುತ್ತದೆ. ಕೆಲವರಿಗೆ ಅಪಸ್ಮಾರ ರೋಗವನ್ನೂ ತರುತ್ತದೆ...   ಹಾಗಾಗಿ, ತಂಗಳನ್ನು ರಾಸಾಯನಿಕ ದೃಷ್ಟಿಯಿಂದ ನೋಡಬಾರದು...     ಧನ್ಯವಾದಗಳು••••••••••••••••••••••••••••••••••••••

Tue, 03 Oct 2023

All blogs